ಸಾಹಿತ್ಯ ಸಂವಾದ

ನಮಸ್ತೆ, ಅಕ್ಟೋಬರ್ 4 ಭಾನುವಾರ ಸಂಜೆ ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳ ಅಡಿಯೋ ಬುಕ್ ಲೋಕಾರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕನ್ನಡಕ್ಕೆ ಗ್ರಾಮ್ಯ ಸೊಗಡಿನ, ನೆಲದ ಬನಿಯ ಸಶಕ್ತ ಸಾಹಿತ್ಯ ನೀಡಿದ ರಾಮಣ್ಣ ಅವರ ಕಥೆಗಳ ಕುರಿತು ಸಾಹಿತ್ಯ ಸಂವಾದವೂ ಆಯೋಜಿತವಾಗಿದೆ. ಸಂವಾದದಲ್ಲಿ ಎಸ್.ಜಿ. ಸಿದ್ದರಾಮಯ್ಯ, ಓ.ಎಲ್. ನಾಗಭೂಷಣಸ್ವಾಮಿ ಮತ್ತು ಹೆಚ್.ಎಲ್. ಪುಷ್ಪ ಅವರು ಮಾತನಾಡಲಿದ್ದಾರೆ.

ಈ ಸಾಹಿತ್ಯ ಸಂವಾದವು ಏಕಕಾಲದಲ್ಲಿ ಜೂಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಪ್ತಸಾರವಾಗುತ್ತದೆ. ಸಂವಾದದಲ್ಲಿ ಪಾಲ್ಗೊಳ್ಳಬೇಕೆಂಬ ಅಸಕ್ತಿಯ ಮನಸುಗಳನ್ನು ಮಾತ್ರ ಜೂಮ್ ವೆಬಿನಾರ್ಗೆ ಸೇರ್ಪಡೆ ಮಾಡಲಾಗುತ್ತದೆ.

whatsapp-image-2020-09-28-at-12.16.47

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬದುಕು ವೈದ್ಯ ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರವನ್ನು ಮೀರಿ ಸಮಾಜ, ರಾಜಕೀಯ, ಜನಪರ ಆಂದೋಲನಗಳು, ಪರಿಸರ ಸಂರಕ್ಷಣೆ ಮುಂತಾದ ಜನಪರ ಕಾಳಜಿಗಳ ಕ್ಷೇತ್ರಗಳಲ್ಲಿ ಚಾಚಿಕೊಂಡಿತ್ತು. ನಿರ್ಲಕ್ಷ್ಯಕ್ಕೊಳಗಾದ ಗ್ರಾಮೀಣ ಬದುಕು, ವಿಘಟನೆಗೊಳ್ಳುತ್ತಿರುವ ಸಾಮಾಜಿಕ ಸಂರಚನೆಗಳು, ಕಟ್ಟು ಹರಿದ ಪಂಜಿನಂತೆ ದಿಕ್ಕೆಟ್ಟ ಯುವಜನತೆ ಮತ್ತು ಛಿದ್ರಗೊಳ್ಳುತ್ತಿರುವ ಅವರ ಕನಸುಗಳು, ಬರಡಾಗುತ್ತಿರುವ ಹಸಿರು ಮತ್ತು ಬರಿದಾಗುತ್ತಿರುವ ಸಂಪನ್ಮೂಲ ಅವರಲ್ಲಿ ಯಾವತ್ತೂ ತಲ್ಲಣಗಳು ಹುಟ್ಟುಹಾಕಿದ್ದವು. ಹಸಿರಾದ ಗದ್ದೆ, ತೋಟ, ಕಾಡುಗಳಲ್ಲಿ ಹಕ್ಕಿಗಳ ಚೀ….ಪೀ…. ಕಲರವ ಅನುರಣಗೊಳ್ಳುವ ಸಮೃದ್ಧ ಕನಸನ್ನು ಅವರು ಕಾಣುತ್ತಿದ್ದರು. ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಓದಿಕೊಂಡು ಅಲ್ಲಿನ ಮಾನವೀಯ ಸೆಲೆಗಳನ್ನು ಶೋಧಿಸಿ ಉಣಬಡಿಸುತ್ತಿದ್ದ ರಾಮಣ್ಣನವರು ಮಂಡ್ಯ ನೆಲವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮಂಡ್ಯವೇ ನನ್ನ ಇಂಡ್ಯಾ ಎಂದು ನಂಬಿದ್ದ ರಾಮಣ್ಣನವರ ಭಾವಕೋಶದಲ್ಲಿ ಮಂಡ್ಯ ಜಿಲ್ಲೆಯ ಸೊಗಡು, ಅಲ್ಲಿಯ ಮಣ್ಣಿನಿಂದ ಹುಟ್ಟುವ ವಿಶಿಷ್ಟ ವಾಸನೆ, ಅಲ್ಲಿನ ಸಂಸ್ಕೃತಿಯ ಗಹ್ವರದಿಂದ ಪುಟಿದೇಳುತ್ತಿದ್ದ ಸ್ವರಮೇಳ, ಜನರ ಹೃದಯ ವೈಶಾಲ್ಯ ತುಂಬಿ ತುಳುಕುತ್ತಿದ್ದವು. ಹಾಗೆಯೇ ಅಲ್ಲಿನ ಜನರ ಆಸೆಬುರುಕತನ, ಆಧುನಿಕತೆಗೆ ಶರಣಾಗಿ ಮೈಗೂಡಿಸಿಕೊಂಡ ಧಾವಂತ ಬದುಕು, ಮಾನವೀಯತೆಯನ್ನು ನುಂಗಿ ನೊಣೆಯುವ ಜಾತೀಯತೆಯ ಹುನ್ನಾರಗಳನ್ನೂ ಗ್ರಹಿಸಬಲ್ಲವರಾಗಿದ್ದರು. ಅವುಗಳನ್ನು ಕತೆಯಾಗಿಸುವ ಕಲೆಗಾರಿಕೆ ಸಿದ್ಧಿಸಿಕೊಂಡಿದ್ದರು. ಹಳ್ಳಿಗಾಡಿನ ಉರಿಬಿಸಿಲಿಂದ ಬಂದ ರಾಮಣ್ಣ ಬೆಳದಿಂಗಳನ್ನು ಅರಸಿದವರು.  ಮುಂದುವರೆದಿದೆ>>> 


%d bloggers like this: