ಡಾ. ರಾಮಣ್ನ ಅವರದು ಜೀವಪರ ಕಾಳಜಿ. ಬೇಸಾಯ ಮತ್ತು ಬೇಸಾಯದ ಬದುಕು ಜೀವಪೊರೆಯುವ ಕಾಯಕವೆಂದು ನಂಬಿದ್ದರು. ಕತೆಗಾರನಾಗಿ ಬದುಕು ಆರಂಭಿಸಿದ ದಿನಗಳಲ್ಲಿ ‘ಸುಗ್ಗಿ’ ಕತೆಯಿಂದ ನಾಡಿನ ಜನರಿಗೆ ಗ್ರಾಮೀಣ ಬದುಕು ಮತ್ತು ಭಾಷೆಯನ್ನು ಪರಿಚಯಿಸಿದ ಅವರ ಕತೆಗಳೆಲ್ಲವೂ ಕೃಷಿ ಬದುಕಿನೊಡನೆ ಮಿಳಿತಗೊಂಡ ಗ್ರಾಮೀಣ ಬದುಕಿನ ಶೋಧಗಳಾಗಿದ್ದವು. ರಾಂಣ್ಣನವರ ತಾತ್ವಿಕತೆಯನ್ನು ಎತ್ತಿಹಿಡಿಯಲು ಫಲವತ್ತತೆ, ಜೀವಂತಿಕೆ ಮತ್ತು ಕೃಷಿ ಸಮೃದ್ಧಿಯನ್ನು ಪ್ರತಿನಿಧಿಸುವ ‘ಪಿಳ್ಳಾರಿ’ ಅಥವಾ ‘ ಬೆನಕ’ ನನ್ನು ಪ್ರತಿಷ್ಠಾನದ ಲಾಂಛನವಾಗಿ ಅಳವಡಿಸಿಕೊಳ್ಳಲಾಗಿದೆ.
ಈ ಲಾಂಛನವನ್ನು ರೂಪಿಸಿದವರು ಕಲಾವಿದೆ ಶ್ರೀಮತಿ ಅನಿತಾ ರೆಡ್ಡಿ.